Wednesday 4 May 2016




ಪ್ರೀತಿಯೊಂದೇ ನಾಮ ಹಲವು 

ಅಮ್ಮಾ ಎಂಬ ಎರಡಕ್ಷರದಿಂದ ಪ್ರೀತಿಸುವಳು ನನ್ನ ಅಮ್ಮ 
ತಾಯಿ ಎಂಬ ಎರಡಕ್ಷರದಿಂದ ಕಾಯುವಳು ಮಮತಾಮಯಿ ತಾಯಿ 
ಮಾತೆ ಎಂಬ ಎರಡಕ್ಷರದಿಂದ  ರಕ್ಷಿಸುವಳು ನನ್ನನ್ನು ಆ ಮಾತೆ 
ಅವ್ವ ಎಂಬ ಎರಡಕ್ಷರದಿಂದ ನನ್ನ ಮನದಲ್ಲಿ ಸದಾ ನೆಲೆಸಿರುವವಳು ನನ್ನ ಹಡೆದವ್ವ 
-------------------------------------------------------------------------------------------------




ನನ್ನ ಪ್ರೀತಿಯ ಅಮ್ಮ 

ನಾನು ಈ ಭೂಮಿಗೆ ಬರಲು 
ಸುಂದರವಾದ ಜೀವವನ್ನು ಪಡೆಯಲು
ಕಾರಣೀಭೂತಳು ನನ್ನ ಪ್ರೀತಿಯ ಅಮ್ಮ


ಅವಳ ಕರುಳ ಹಿಂಡಿ ಭೂಮಿಗೆ ಬಂದೆ 
ಅವಳೊಡಲ ಅಮೃತವ ಹೀರಿದೆ 
ಆದರೂ ಸದಾ ನಗುತಿರುವಳು ನನ್ನ ಪ್ರೀತಿಯ ಅಮ್ಮ 

ನನ್ನನ್ನು ಎತ್ತಿ ಮುದ್ದಾಡಿಸಿದವಳು 
ನನ್ನ ನಿರ್ಮಾಲ್ಯವನ್ನು ಶುದ್ಧ ಮಾಡಿದವಳು 
ನನ್ನ ಆರೋಗ್ಯವೇ ಅವಳ ಸಂತೋಷ ಎನ್ನುವಳು ನನ್ನ ಪ್ರೀತಿಯ ಅಮ್ಮ 

ನನ್ನ ಕೈ ಹಿಡಿದು ನಡೆಸುವಳು 
ಬೇಡವೆಂದರೂ ಬಾಯಿಗೆ ಅನ್ನವನ್ನು ತುರುಕುವಳು 
ಬೇಸರವಿಲ್ಲದೇ ನನ್ನ ಬೆಳೆಸುವಳು ನನ್ನ ಪ್ರೀತಿಯ ಅಮ್ಮ 


ನನ್ನ ತಪ್ಪನ್ನು ಪ್ರೀತಿಯಿಂದ ತಿದ್ದುವಳು 
ತಪ್ಪಾದರೆ ಒಮ್ಮೊಮ್ಮೆ ದಂಡಿಸುವಳು 
ದಂಡನೆಯಲ್ಲೂ ಕರುಣೆ ತೋರುವಳು ನನ್ನ ಪ್ರೀತಿಯ ಅಮ್ಮ 


ವಿದ್ಯೆ ಕಲಿಸುವ ಮೊದಲ ಗುರುವು ಅವಳೇ 
ಬುದ್ಧಿ ತಿಳಿಸುವ ಮೊದಲ ಗೆಳತಿ ಅವಳೇ 
ನನಗೆ ಜ್ಞಾನದ ಮಾರ್ಗವನ್ನು ತೋರಿಸಿದವಳು ನನ್ನ ಪ್ರೀತಿಯ ಅಮ್ಮ 













Thursday 5 March 2015




ಪ್ರಸಿದ್ಧಿ 


          ಅಂದು  ನಾನಾಗ ಬಯಸಿದ್ದೆ  ಡಾ। ಮೋದಿ 
    ಕೇಳಿ  ತಿಳಿದಿದ್ದೆ  ಜನರಿಗೆ ಅವರು ಮಾಡುವ  ಮೋಡಿ 


    (ಮುರುಗಪ್ಪ ಚನ್ನವೀರಪ್ಪ ಮೋದಿ) 
         
        ಅಂದು  ನಾನಾಗ  ಬಯಸಿದ್ದೆ  ನರೇಂದ್ರ ಮೋದಿ 
           ಕರ್ನಾಟಕದ ರಸ್ತೆಗಳ ಗುಂಡಿಗಳ ನೋಡಿ 


(ನರೇಂದ್ರ ಮೋದಿ)

 ಆದರೆ, ಇಂದು ನಾನಾಗ  ಬಯಸಿದೆ 
 ನಾನು  ನಾನೇ  ಆಗಲು ಪ್ರಸಿದ್ಧಿ!




Tuesday 10 February 2015




ಪ್ರಕೃತಿ  

        






ಪ್ರಕೃತಿ ನೋಡಲು ಅದೆಷ್ಟು ಸುಂದರ
ಗಿಡಮರ ನೆಲಜಲಗಳಿಂದ ತುಂಬಿ ಮನೋಹರ 

ನೀಲವರ್ಣದ ಆಗಸದಲ್ಲಿ
ಮೂಡಿದೆ ಮೋಡಗಳ ರಂಗವಲ್ಲಿ

ಬೆಳಗಾಗಲು ಕಾರಣ ಉದಯಭಾಸ್ಕರ
ಲೋಕವನು ಬೆಳಗುವ ನಿನಗೆ ನನ್ನ ನಮಸ್ಕಾರ 











ಹುಣ್ಣಿಮೆ ಬಂತೆಂದರೆ ನಗುವ ಚಂದಿರ 
ಮಕ್ಕಳ ಪಾಲಿಗೆ ನೋಡಲು ಬಲು ಸುಂದರ 

ಬಾನಲ್ಲಿ ನೋಡಿ ಚುಕ್ಕಿಗಳ ಸಾಲು ಸಾಲು
ನೆಲದಲ್ಲಿ ನಿಲ್ಲಲಾರವು ನನ್ನ ಕಾಲು 

ಮಳೆ ಬಂತೆಂದರೆ ಬಾಗುವ ಮರ 
ಮಳೆ ಬಿಟ್ಟೊಡನೆ ತೊಟ್ಟಿಕ್ಕುವ ಜಲ 




ಸಮುದ್ರದ ಮಹಾ ಅಬ್ಬರ ಮಳೆಗಾಲದಲ್ಲಿ 
ಸ್ತಬ್ದವಾಗಿಯೇ ನೆಲೆಯೂರುತಿದೆ ಬೇಸಿಗೆಯಲ್ಲಿ 

ಮೋಡ ಬಂತೆಂದರೆ ಸುರಿಯುವ ಮಳೆ
ನಿಂತ ಮೇಲೆ  ಇಳೆಗೆ ಎಷ್ಟೊಂದು ಕಳೆ


ರಸ್ತೆಯಲ್ಲಿ ಬಂದರೆ ವಾಹನಗಳ ಸಾಲು ಸಾಲು
ನೋಡಿ ಆದಳು ಪ್ರಕೃತಿ ಮಾತೆ ಆದಳು ಕಂಗಾಲು 























Monday 26 January 2015



समय


  ’काम-काम’ कहकर
  लोग रहते हैं व्यस्त।
  काम करके वे 
  हो जाते हैं सुस्त॥
पैसे और नाम कमाने
भागते रहते हैं लोग।
उनके पास समय नहीं है
करने सुख का भोग॥
  बच्चों को समय नहीं है
  माँ-बाप के लिए।
  न ही माँ-बाप के पास
  है वक्त बच्चों के लिए॥
होते हैं रास्तों में
कई-कई दुर्घटनाएँ।
वे जल्दी में रहकर दूसरों
को धक्का दे जाएँ॥
  चलता रहता है समय
  किसी के लिए रुकता नहीं।
  रिश्तों की खुशियों में लोग
  समय बरबाद करेंगे नहीं॥
समय के साथ बदलती 
रहती है यह दुनिया।
समय की कमी महसूस 
होती है हम सबको यहाँ॥





Monday 19 January 2015





ತ್ಯಾಗ 

ಅಕ್ಕಪಕ್ಕದ ಊರಿನವರಾದ  ಲತಾ ಮತ್ತು ಆನಂದ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು.  ಬೇರೆ ಬೇರೆ  ಕಾಲೇಜುಗಳಲ್ಲಿ ಓದುತ್ತಿದ್ದರೂ ಅವರಲ್ಲಿ ಪ್ರೀತಿ ಗಾಢವಾಗಿತ್ತು. ಆನಂದನಿಲ್ಲದೆ ಲತಾಳಿಲ್ಲ, ಲತಾಳಿಲ್ಲದೇ ಆನಂದನಿಲ್ಲ ಎನ್ನುವಷ್ಟರಮಟ್ಟಿಗೆ ಬೆಳೆದಿತ್ತು ಅವರ ಪ್ರೇಮ. 
ಲತಾ ಮತ್ತು ಆನಂದರ ಭೇಟಿ ಒಂದು ಆಕಸ್ಮಿಕವೆಂದೇ ಹೇಳಬಹುದು.  ಅಂದು ಅನಿರೀಕ್ಷಿತವಾಗಿ ಬಂದ್ ಘೋಷಿಸಲ್ಪಟ್ಟಿತ್ತು.   ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಹೋದ ಲತಾ ಹನ್ನೊಂದೂವರೆಗೆ ಕಾಲೇಜಿನಿಂದ ಮನೆಗೆ ಹೊರಟಿದ್ದಳು.  ಒಂದಾದ್ರೂ ಬಸ್ ಬರಬಹುದೆಂಬ ನಿರೇಕ್ಷೆಯಲ್ಲಿ ಬಸ್ಸ್ಟಾಂಡಿನಲ್ಲಿ ನಿಂತಿದ್ದಳು. ಬರೇ ರಿಕ್ಷಾ, ಕಾರು, ದ್ವಿಚಕ್ರವಾಹನಗಳು ಓಡಾಡುತ್ತಿದ್ದವು.  ಬಸ್ ನ   ಸುಳಿವೇಯಿರಲಿಲ್ಲ.  ಕುರುಡಿಯಾದ ಅವಳಿಗೆ ಲಿಫ್ಟ್ ಕೊಡಲು ಯಾರೂ ಮುಂದೆ ಬರಲಿಲ್ಲ.   ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ತನ್ನ ಕಾಲೇಜಿನಿಂದ ಹೊರಟ ಆನಂದನಿಗೆ, ಕುರುಡರ ಶಾಲೆಯ ಬಳಿಯ ಬಸ್ಸ್ಟಾಪಿನಲ್ಲಿ  ಒಂಟಿ ಹೆಣ್ಣು ನಿಂತಿರುವುದು ಕಾಣಿಸಿತು.  ಪಾಪ!  ಕಣ್ಣು ಕಾಣುವುದಿಲ್ಲ.  ಇವತ್ತು ಬಸ್ಸುಗಳೂ  ಬರುವುದಿಲ್ಲ.  ಇವಳನ್ನು ಹೀಗೇ ಬಿಡಬಾರದೆಂದು ಯೋಚಿಸುತ್ತಾನೆ. ಡ್ರೈವರ್ ಕಾರ್ ನಿಲ್ಲಿಸುತ್ತಾನೆ. ಲತಾಳ ಬಳಿಗೆ ಬಂದು 'ನೋಡಿ ನೀವು ಇಲ್ಲಿ ಎಷ್ಟು ಹೊತ್ತು ನಿಂತರೂ, ಯಾವುದೇ ಬಸ್ ಬರುವುದಿಲ್ಲ.  ನಿಮಗೆ ಅಭ್ಯಂತರವಿಲ್ಲದಿದ್ದರೆ, ನಾನು ನಿಮ್ಮನ್ನು ಮನೆಗೆ ಬಿಡುತ್ತೇನೆ'.  ಅವನ ಮಾತಿನಲ್ಲಿ ವಿಶ್ವಾಸವಿಟ್ಟ ಲತಾ ಕಾರನ್ನೇರುತ್ತಾಳೆ.  ದಾರಿ ಮಧ್ಯೆ ಪರಸ್ಪರ  ಮಾತನಾಡುತ್ತಾ ಒಬ್ಬರ ಪರಿಚಯ ಮತ್ತೊಬ್ಬರಿಗೆ ಆಗುತ್ತದೆ.  ಹೀಗೆ ಪರಿಚಯ ಪ್ರೇಮಕ್ಕೆ ತಿರುಗುತ್ತದೆ.  ಕುರುಡಿಯೆಂಬ ಅನುಕಂಪವೋ, ಬಡವಳೆಂಬ ಕರುಣೆಯೋ, ಒಟ್ಟಾರೆಯಾಗಿ ಆನಂದನು ಲತಾಳಲ್ಲಿ ಆಕರ್ಷಿತನಾಗುತ್ತಾನೆ.  ತನಗೆ ಸಹಾಯ ಮಾಡುತ್ತಿದ್ದ ಆನಂದನ ಮೇಲೆ ಲತಾಳಿಗೆ ಪ್ರೀತಿ ಮೂಡುವುದು ಸಹಜವೇ! ಲತಾ, ಆನಂದರು ತಿರುಗದ ಜಾಗವಿಲ್ಲವೆಂಬಂತೆ ಪಾರ್ಕುಗಳಿಗೆ, ಹೋಟೆಲ್ ಗಳಿಗೆ  ಸುತ್ತಾಡುತ್ತಾರೆ.   ಜೊತೆಯಲ್ಲಿ ವಿದ್ಯಾಭ್ಯಾಸವೂ ಮುಂದುವರಿಯುತ್ತದೆ. 

ಇಬ್ಬರ ವಿದ್ಯಾಭ್ಯಾಸವೂ ಮುಗಿಯುತ್ತದೆ.  ಇಬ್ಬರೂ ಮದುವೆಯಾಗಲು ಬಯಸುತ್ತಾರೆ.  ಇಷ್ಟರಲ್ಲಿ ಅದ್ಯಾರೋ ಲತಾಳಿಗೆ ಕಣ್ಣು ದಾನ ಮಾಡುತ್ತಾರೆ.  ಕಣ್ಣಿನ  ಕಟ್ಟು ಬಿಚ್ಚುವಾಗ ಲತಾ ತನ್ನ ಪ್ರಿಯತಮನಾದ ಆನಂದನನ್ನು ನೋಡಬಯಸುತ್ತಾಳೆ.  ಆದರೆ, ಅವನಿಗೆ ಅಲ್ಲಿಗೆ ಬರಲು ಆಗದ ಕಾರಣ, ಅವನ ಪೋಟೋವನ್ನು ತೋರಿಸುತ್ತಾರೆ.  ಆನಂದನನ್ನು ಕಂಡ ಲತಾಳಿಗೆ ತುಂಬಾ ಖುಶಿಯಾಗುತ್ತದೆ.  ಆಸ್ಪತ್ರೆಯಿಂದ ಬಿಡುಗಡೆಯಾದ ಲತಾ ಆನಂದನನ್ನು ಕಾಣಲು ಅವನ ಮನೆಗೆ ಹೋಗುತ್ತಾಳೆ.  
ಆನಂದನನ್ನು ಕಂಡ ಲತಾಳಿಗೆ 'ಶಾಕ್ ' ಹೊಡೆದಂತಾಗುತ್ತದೆ. ತಾನು ಪ್ರೀತಿಸುತ್ತಿದ್ದ ಆನಂದನು ಇವನೇ ಏನು?  ತಾನು ಫೋಟೋದಲ್ಲಿ ನೋಡಿದ 
ಆನಂದ ಇವನೇ!  ಲತಾ ಒಂದು ಕ್ಷಣ ಸ್ಥಂಭೀಭೂತಳಾದಳು. ಆನಂದನೇ ಮಾತನಾಡುತ್ತಾನೆ.  "ಈಗ ಹೇಗಿದ್ದೀಯ?  ನಮ್ಮ ಮದುವೆ ಯಾವಾಗ?" ಮದುವೆ ಎಂದಾಕ್ಷಣ ಲತಾಳ ಸಿಟ್ಟು ನೆತ್ತಿಗೇರಿತು.  ಅವಳು ನುಡಿಯುತ್ತಾಳೆ, "ನನಗೆ ನೀನು ಕುರುಡನೆಂದು ಗೊತ್ತಿರಲಿಲ್ಲ.  ಮೊದಲೇ ಗೊತ್ತಿದ್ದಿದ್ದರೆ ನಿನ್ನ ಸಹವಾಸವನ್ನೇ ಮಾಡುತ್ತಿರಲಿಲ್ಲ.  ಕುರುಡನಿಗೆ ಮದುವೆಯೊಂದು ಕೇಡು.  ನೀನು ಶ್ರೀಮಂತನಾದರೇನು, ನಿನ್ನ ದಾಸಿ ನಾನಾಗಲಾರೆ.  ನನ್ನ ಜೀವಮಾನವಿಡೀ ನಿನ್ನ ಸೇವೆಯಲ್ಲೇ ಕಳೆಯಲು ನಾನು ಸಿದ್ಧಳಿಲ್ಲ.  ದಯವಿಟ್ಟು ನನ್ನನ್ನು ಮರೆತುಬಿಡು. ಇನ್ನೊಮ್ಮೆ ನನ್ನ ಭೇಟಿಮಾಡುವ ಪ್ರಯತ್ನ ಮಾಡಬೇಡ. ಗುಡ್ ಬೈ" ಎಂದು ಸಿಟ್ಟಿನಿಂದ ನುಡಿದು ಅಲ್ಲಿಂದ ಹೊರಟು  ಹೋಗುತ್ತಾಳೆ.  
ಇದಾದ ಒಂದು ವಾರದ ನಂತರ, ಅವಳ ಹೆಸರಿಗೆ ಒಂದು ಪತ್ರ ಬರುತ್ತದೆ.  ಪತ್ರ ಒಡೆದು ಓದುತ್ತಾಳೆ,  "ನಿನ್ನ ಹೊಸಬಾಳು ಸುಖಮಯವಾಗಲಿ.  ಆದರೆ, ನನ್ನದೊಂದು ಕೊನೆಯ ಕೋರಿಕೆ.  ದಯವಿಟ್ಟು ನಡೆಸಿಕೊಡು.  ನನ್ನ ಕಣ್ಣುಗಳು ನಿನ್ನ ಬಳಿ ಇವೆ.  ಅವುಗಳನ್ನು ಜೋಪಾನವಾಗಿ ನೋಡಿಕೋ.  ಇಂತಿ, ಎಂದಿಗೂ ನಿನ್ನವನಾಗಲಾರದ ಆನಂದ." ಪತ್ರ ಓದಿದ ಲತಾ ಕುಸಿದು ಬಿದ್ದಳು. 

             




Thursday 15 January 2015





ನಾಮದಬಲ 

ಬಿಳೀಯಿರುವವನು  ಕೃಷ್ಣ 
ಕುರೂಪಿಯಾಗಿರುತ್ತಾನೆ ಹೆಸರು ಮನ್ಮಥ 
ನಾಗವೇಣಿಗಿರುವುದು ಬೆಕ್ಕಿನಬಾಲದಂತೆ ಜಡೆ 
ಕೃಷ್ಣವೇಣಿ ಎನ್ನುವಳು, ನನ್ನ ತಲೆಕೂದಲೇಕಿಷ್ಟು ಬಿಳಿ?
ಗೋಪಾಲಕೃಷ್ಣನಂತೆ, ದನದ ಚಿತ್ರವನ್ನೂ ನೋಡಿಲ್ಲ 
ರಾಮಚಂದ್ರನಿಗೋ ಹೆಂಡತಿ, ಜೋತೆಗಿಬ್ಬರು 
ಅವಳು ಆದಳು ಶಾರದೆ, ಬರೆಯಲು ಒಂದಕ್ಷರವೂ ಬಾರದೆ 
ಇವಳಾದಳು ದೇವಿ ಸರಸ್ವತಿ, ವಿದ್ಯೆ ಎಂದರೆ ಇವಳಲ್ಲಿ ನಾಸ್ತಿ. 
ಅವನ ಹೆಸರು ಶ್ರೀನಿವಾಸ, 
ಎಲ್ಲಿದೆ ಅವನಲ್ಲಿ ಶ್ರೀ ......ನಿವಾಸ 
ಹೆಸರು ಮಾತ್ರಾ ನಿರ್ಮಲ, ಮೈ ಮನವೆಲ್ಲಾ ಬರೀ ಕಷ್ಮಲ 
ವೀಣೆ ಬಾರಿಸಲು ಬಾರದವಳು ವಾಣಿ 
ವಿನೋದನಾದರೇನು ಸದಾ ಗಂಭೀರ 
ವಿಜಯನಾದರೇನು ಸದಾ ಸೋಲಿನ ಸರದಾರ  
ಪದ್ಮನಾಭನಂತೆ, ಸಿಗರೆಟ್ಟು ಜೇಬಿನಲ್ಲಿ 
ಕಮಲನಾಭನಂತೆ, ಕದ್ದು ಕುಡಿಯುವನು ಬಾರಿನಲ್ಲಿ
ಮುಖತುಂಬಾ ಕಲೆ, ಹೆಸರು ಶಶಿಕಲಾ 
ರವಿಯ ತೇಜಸ್ಸು ಅರಿಯದವಳು ರವಿಕಲಾ 
ಹೆಸರು ಮಾತ್ರಾ ಸುಂದರ ಮುಟ್ಟಿದರೆ,
ಕೈತೊಳೆಯಲು ಅವಸರ ........... 








Wednesday 14 January 2015

ಅಮ್ಮಾ  ....... 

ಅಮ್ಮಾ! ನೀನಂದು  ಎಷ್ಟೊಂದು ಕಷ್ಟಪಟ್ಟೆ , 
 ನನ್ನನ್ನೀ ಭೂಮಿಗೆ ತರಲು 
ನವಮಾಸಗಳು ಹೊಟ್ಟೆಯಲ್ಲೇ ಹೊತ್ತು ತಿರುಗಿದೆ ,
 ಆಗದೆ ಕೆಳಗಿಡಲು 
ನಾನೆಂದೂ ಭಾರವಾಗಲಿಲ್ಲ ನಿನ್ನ ಜೀವಕೆ ,
ಆದರೆ ನೀನಿಂದು ಭಾರವಾದೆ ನನ್ನ ಸಂಸಾರಕೆ 
ಹೆರಿಗೆ ಒಂದು ಪುನರ್ಜನ್ಮ ಎನ್ನುವರು ತಿಳಿದವರು ,
ಅನುಭವಿಸಿದವರಿಗೇ ಗೊತ್ತು ಅದರ ನೋವು 
ಎಂದರು ಬಲ್ಲವರು 
ಅದನ್ನೂ ಮೀರಿ ನಗುತ್ತಾ ಜನ್ಮ ಕೊಟ್ಟೆ ನೀನನಗೆ,
ಇದಕ್ಕೆ ಬದಲಾಗಿ ಏನು ಕೊಡಬಲ್ಲೆ ನಾನಿನಗೆ 
ನಾನು ಮಾಡುತ್ತಿದ್ದ ಮಲಮೂತ್ರಗಳನ್ನು 
ಖುಷಿಯಿಂದ ಸ್ವಚ್ಛಮಾಡುತ್ತಿದ್ದೆ ನೀನನಗಾಗಿ,
ನೀನು ಮಾಡಿದ ಉಪಕಾರಕ್ಕೆ ಪ್ರತಿಯಾಗಿ 
ವೃದ್ಧಾಶ್ರಮ ತೋರಿಸಿದೆ ನಾ ನಿನಗಾಗಿ 
ನಾನು ನಕ್ಕರೆ ನೀನೂ ನಗುತ್ತಿದ್ದೆ ಅಂದು,
ನಿನ್ನ ನಗುವೇ ಬೇಡವಾಗಿದೆ ನನಗಿಂದು
ಅಂದು ನಾನು ಅತ್ತರೆ ನೀನೂ ಅಳುತ್ತಿದ್ದೆ ,
ಇಂದು ನೀನತ್ತರೆ ನಾನೇಕೆ ಅಳಲಿ ಎಂದು ಕೇಳುತ್ತಿದ್ದೆ 
ಊಟಕ್ಕೆ ನಾ ಒಲ್ಲೆನೆಂದಾಗ ನೀ ತೋರಿಸುವೆ 
ಬಾನಲ್ಲಿ ಚಂದಿರ ಬಂದ ನೋಡು 
ಉಣ್ಣಲು ನೀ ಕೂತಾಗ ನಾನಂದೆ 
ನೀನಿಲ್ಲಿಂದ  ಬೇಗ ಓಡು 
ಅಂದು ನಾನುಣ್ಣುದೆ ಹೋದರೆ ನೀನುಣ್ಣೆ 
ಇಂದು ನೀನುಣ್ಣುದೆ ಹೋದರೂ ನಾನುಣ್ಣಬಲ್ಲೆ 
ನಿನ್ನ ರಕ್ತ ಮಾಂಸಗಳನ್ನೇ ಹಂಚಿಕೊಂಡು ಹುಟ್ಟಿರುವೆ 
ನಿನ್ನ ರಕ್ತವನ್ನೇ ಹೀರಿ ನಿನ್ನನ್ನು ಹೊರಗಟ್ಟಿರುವೆ 
ಅಂದು ನಾನು ಅತ್ತರೆ ನೀ ಬಂದು ಕೇಳುತ್ತಿದ್ದೆ 
ಏನಾಯಿತು ನನ್ನ ಮುದ್ದಿನ ಕಂದಾ!
ಆದರೆ, ಇಂದು ನಿನ್ನನ್ನು ಕಂಡರೆ ನನಗಾಗುವುದು 
ಇದೊಂದು ಬೇಡದ ಬಂಧ! 
ನಾ ತಪ್ಪು ಮಾಡಿದರೆ ನೀನಂದು 
ಕಟ್ಟುತ್ತಿದ್ದೆ ದೇವರಿಗೆ ದಂಡ  
ನೀನೇನನ್ನೂ ಮಾಡದೆ ಕಾಣಿಸಿದೆ 
ನನಗೆ ಬರೀ ಕೂಳು ದಂಡ 
ಬಡತನದಲ್ಲೂ ನೀ ಸಾಕಿದ ಪರಿ ನಾಬಲ್ಲೆ 
ಸಿರಿತನದಲ್ಲೂ ನಿನ್ನನ್ನು ಸಾಕಲು ನಾನೊಲ್ಲೆ